೧೪-೩-೨೦೦೯ರ ಶನಿವಾರ ಬೆಳಿಗ್ಗೆ ೧೦ರಿಂದ ಸಂಜೆ೫ರವರೆಗೆ ಸಕಲೇಶಪುರದ ಆಶ್ರಿತ ಹೋಟೆಲ್ ಹಾಲ್ನಲ್ಲಿ.
ಸಂಕಿರಣದ ಉದ್ಘಾಟನೆ ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಾಪಕ ರಾಜಪ್ಪ ದಳವಾಯಿ. ಅಧ್ಯಕ್ಷತೆ- ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಸಾದ್ ರಕ್ಷಿದಿ
ಮುಖ್ಯ ಅತಿಥಿಗಳು: ಸಮಾಜಶಾಸ್ತ್ರಜ್ಞ ಡಾ.ಸಿ.ಜಿ.ಲಕ್ಷ್ಮಿಪತಿ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ನಾಡ್ ಮಹಮೂಬ್ ಪಾಷ.
ಮಧ್ಯಾಹ್ನದ ಗೋಷ್ಠಿ ಅಧ್ಯಕ್ಷತೆ: ರೈತ ಮುಖಂಡ ಎಂ.ಬಿ.ಮುಳ್ಳಯ್ಯ. ಮುಖ್ಯ ಅತಿಥಿಗಳು: ಮೂಡುಬಿದರೆಯ ಚಿಂತಕ-ಸಾಹಿತಿ ಅರವಿಂದ ಚೊಕ್ಕಾಡಿ, ಪತ್ರಕರ್ತರಾದ ಲಕ್ಷ್ಮಣ್ ಹೂಗಾರ್, ದಿನೇಶ್ ಕುಮಾರ್ ಎಸ್.ಸಿ.
ಸಂವಾದದಲ್ಲಿ ರೈತ, ಕಾರ್ಮಿಕ. [...]
Archive for the 'Uncategorized' Category
ವಿಚಾರಸಂಕಿರಣ ಹಾಗು ಸಂವಾದ
March 11, 2009
ಆಸೆ
October 20, 2008
ಕವಿ ಲಕ್ಷ್ಮಣ್ ಗೊತ್ತಲ್ಲ? ಜನಪರ ಕವಿ ಲಕ್ಷ್ಮಣ್ ಎಲ್ಲ ಪ್ರಗತಿಪರ ಹೋರಾಟಗಳಲ್ಲೂ ಮುಂಚೂಣಿಯಲ್ಲಿರುತ್ತಾರೆ. ಮನುಷ್ಯಪರವಾಗಿ ಧ್ವನಿಯೆತ್ತುವ ಎಲ್ಲರ ಒಡನಾಡಿ ಅವರು. ಹಾಗಾಗಿ ಅವರನ್ನು ಎಲ್ಲರೂ ಲಕ್ಷ್ಮಣ್ ಜಿ ಎಂದೇ ಕರೆಯುತ್ತಾರೆ. ಲಕ್ಷ್ಮಣ್ ಜಾತಿ ವಿನಾಶ ವೇದಿಕೆಯ ರಾಜ್ಯಾಧ್ಯಕ್ಷರೂ ಹೌದು. ಅವರ ಸಂಭೋಳಿ ಕೃತಿ ಕನ್ನಡದ ಮಹತ್ವದ ಆತ್ಮಕಥನಗಳಲ್ಲಿ ಒಂದು. ಈಗಾಗಲೇ ಅದು ಹಲವು ಭಾಷೆಗಳಿಗೆ ಅನುವಾದವಾಗಿದೆ. ತಲ್ಲಣ ಹುಟ್ಟಿಸುವಂತೆ ಕವಿತೆ ಬರೆಯುವ ಲಕ್ಷ್ಮಣ್ ಅವರ ಆಸೆ ಎಂಬ ಕವಿತೆ ಇಲ್ಲಿದೆ. ಇದು ಸೆ.೧೫ರ ಅಭಿಮನ್ಯು ಸಂಚಿಕೆಯಲ್ಲಿ ಪ್ರಕಟವಾಗಿದೆ.
ಆಸೆ
ಹಾಲಿಲ್ಲದೆ
ಹಸುಳೆಗಳು
ಉಸಿರು [...]
ಅಖಂಡ ನೆಲವೇ ನನ್ನ ಮಾತೃಭೂಮಿ
October 17, 2008
ಅಗ್ನಿ ಪತ್ರಿಕೆ ಹತ್ತು ವರ್ಷ ಪೂರೈಸಿದ ಸಂದರ್ಭದಲ್ಲಿ ಹೊರಬಂದ ವಿಶೇಷಾಂಕದಲ್ಲಿ ಕವಿ ಬಿ.ಪೀರ್ ಭಾಷ ಅವರ ಕವಿತೆ ಪ್ರಕಟಗೊಂಡಿದೆ. ಅಖಂಡ ನೆಲವೇ ನನ್ನ ಮಾತೃಭೂಮಿ ಎಂಬುದು ಕವಿತೆಯ ಶೀರ್ಷಿಕೆ.
ಕವಿ ಹುಸಿ ರಾಷ್ಟ್ರೀಯತೆಯನ್ನು ಸಾರಾಸಗಟಾಗಿ ತಿರಸ್ಕರಿಸುತ್ತಲೇ ಅಖಂಡ ಭೂಮಂಡಲವೇ ನನ್ನ ಮಾತೃಭೂಮಿ ಎನ್ನುತ್ತಾರೆ.
ಪೀರ್ ಭಾಷಾ ಅವರ ಕವಿತೆ ಇಂಡಿಯಾದ ಒಟ್ಟು ವ್ಯವಸ್ಥೆಯ ಸೋಗಲಾಡಿತನವನ್ನು ಬಯಲಿಗೆಳೆಯುತ್ತದೆ.
ಭಾಷಾ ಅವರ ಈ ಕವಿತೆಯನ್ನು ಅರಗಿಸಿಕೊಳ್ಳುವುದು ಬಹಳಷ್ಟು ಜನರಿಗೆ ಕಷ್ಟವೆನಿಸಬಹುದು. ಆದರೆ ಕಟುಸತ್ಯಗಳನ್ನು ಹರಿತ ಶಬ್ದಗಳಿಂದ ಹೇಳಿರುವ ಕವಿಯನ್ನು ಅಭಿನಂದಿಸಲೇಬೇಕು.
ಪೀರ್ ಭಾಷಾ ಅವರ ಕವಿತೆ [...]